೧೦-ಜೂನ್-೨೦೦೩,
ಮಂಗಳೂರು.
ಮರೆಯಲಾಗದ ದಿನಗಳು
-----------------
ಹರುಷದ ಕ್ಷಣಗಳ ಅಭಾವದೊಂದಿಗೆ
ಕಳೆದೇ ಹೋಯಿತು ವರುಷವೊಂದು!
ಕಂಡು ಸವಿ ನಿರೀಕ್ಷೆಗಳ ದಹನವ
ಮುದುಡಿತು ಮನವು ಬಹುವಾಗಿ ನೊಂದು.
ಪ್ರತಿಬಾರಿಯೂ ಎದುರಿಸಿದಾಗ ಅನಿರೀಕ್ಷಿತ ಏರಿಳಿತಗಳ,
ಕಲಿತೆ ಮರೆಯಲಾಗದ ಪಾಠ ಹೊಸತೊಂದು
ಈ ಎಲ್ಲಾ ಕಹಿ ನೆನಪುಗಳೊಂದಿಗೆ
ಮರೆಯೆನು ಸಹೃದಯರ ಸಹಕಾರವ ಎಂದೆಂದೂ!
ಕೃಷ್ಣ ಶಾಸ್ತ್ರಿ ಸಿ.
ವಿ.ಸೂ. ಇನ್ಫೋಸಿಸ್ ಸೇರಿ ಒಂದು ವರುಷ ಪೂರ್ತಿಯಾದ ದಿನದಂದು ಬರೆದ ಕವಿತೆಯಿದು.
0 comments:
Post a Comment