೧೭-ಮೇ-೨೦೦೩,
ಮಂಗಳೂರು.
ದ್ರೋಹ
------------
ಮನದ ಕಿಟಕಿಯಿಂದ ಇಣುಕಿ ನೋಡಿ ಬಳಿಗೆ ಕರೆದೆ,
ಹತ್ತಿರ ಬಂದಾಗ ಹೃದಯದ ಬಾಗಿಲನ್ನೇ ತೆರೆದೆ.
ಆದರೆ ಕೊನೆಗೆ ನನ್ನ ಕನಸಿನ ಸೌಧವ ಮುರಿದೆ,
ಬಳಿಕ ಕನಸು ಕಾಣುವ ಕಣ್ಣನ್ನೇ ಇರಿದೆ.
ಒಂದೊಮ್ಮೆ ಭಾವಿಸಿದ್ದೆ ನಮ್ಮ ಪ್ರೀತಿಯು ಅಭೇದ್ಯವೆಂದು,
ಈಗ ತಿಳಿಯಿತು ನಾನೊಬ್ಬ ಹತಭಾಗ್ಯನೆಂದು.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment