೦೬-ಎಪ್ರಿಲ್-೨೦೦೩,
ಮಂಗಳೂರು.
ಎಂದಿನಂತೆ
------------
ಮನವ ಸೆಳೆಯಿತು ನಿನ್ನ ಮುಗ್ಧ ವದನ
ಅದರೊಳಗೆ ಕಂಡಿತು ಚೆಲುವಿನ ಮೌನ!
ಇಮ್ಮಡಿಸಿತು ಉತ್ಸಾಹ, ಆದರೂ ನಾಚಿತು ಮನ
ಕುತೂಹಲವ ಕೆರಳಿಸಿತು ಪುನಹ ಅದೇ ಚೆಲುವಿನ ಮೌನ
ಮೌನವ ಭೇದಿಸಿ ಮೊಗದಲ್ಲಿ ಅರಳಿತು ಮುಗುಳ್ನಗೆ,
ತಿಳಿಯದೇ ಪರದಾಡಿದೆ ನಿನ್ನ ಚೆಲುವಿನಾರಾಧಿಸುವ ಬಗೆ!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment