೨೭-ಡಿಸೆಂಬರ್-೨೦೦೨,
ಮಂಗಳೂರು.
ಕೊನೆಯಿಲ್ಲದ ಅಂತ್ಯ
------------
ತಿಳಿಯದೇ ನಿನ್ನ ಮನೆಯ ಹಾದಿಯ ತುಳಿದೆ,
ನನ್ನ ನೋಡುತ್ತಲೇ ನೀ ನಾಚಿ ಮರೆಯಾದೆ!
ಹೀಗೆ ಶುರುವಾದ ಮಧುರಗೀತೆಯು,
ಅದೇಕಾಯಿತು ಅಲ್ಪಾಯು?!
ನಾಗಾಲೋಟದಿ ಓಡುವ ಲೋಕದಲ್ಲಿ,
ಎಲ್ಲರಂತೆ ನೀನೂ ನನ್ನ ಮರೆತೆ!
ಬೇರೊಬ್ಬನ ಆಗಮನದೊಡನೆ,
ಮರೆಯಾಯಿತು ನಮ್ಮ ಪ್ರೇಮ ಕಥೆ!
ಎಲ್ಲರಿಗೂ ಗೊತ್ತು,
ಇದು ಸಹಜ ಮರಣ!
ಆದರೆ ಎಲ್ಲರೂ ಹುಡುಕುವರು,
ಇದರ ನಿಜವಾದ ಕಾರಣ!!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment