೨೭-ಡಿಸೆಂಬರ್-೨೦೦೨,
ಮಂಗಳೂರು.
ಆಶ್ಚರ್ಯ
------------
ಹಿಂದಿರುಗಿ ನೋಡಿದೆ, ಬೆರಗಾದೆ,
ಭಾವನೆಗಳ ಮಧ್ಯೆ ಬಂಧಿಯಾದೆ!
ಹೊಳಪನ್ನು ಕಾಣದ ಕಣ್ಣುಗಳ ಸಂಖ್ಯೆ
ವಿಚಿತ್ರ ಮುದ ನೀಡಿತು ಮನಕೆ!
ತೆರೆದೆ ಲೋಕದ ಪ್ರತಿ ಪುಟವ,
ಎಲ್ಲವೂ ಅದೆಷ್ಟು ಸ್ಫುಟ!
ಯಾರಲ್ಲೂ ಶುರುವಾಗಲಿಲ್ಲ
ಭಾವನೆಗಳ ಪೈಪೋಟಿ,
ಎಲ್ಲೆಡೆಯೂ ಕಂಡೆ
ಅಲೌಕಿಕ ಹತೋಟಿ!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment