೮-ಜುಲೈ-೨೦೦೨,
ಬೆಂಗಳೂರು.
ಬದಲಾವಣೆ
-------------------
ಬಿಟ್ಟೋಡಿದನವನು ತನ್ನ ಪ್ರೀತಿಯ ಮೌನದ ಬಿಲ
ಕೇಳಲಾಗದೆ ಹುಚ್ಚು ಮನದ ಭಯಾನಕ ಗದ್ದಲ!
ಯಾರೋ ಕೊಟ್ಟರು ಅವನಿಗೆ ಆಸೆಗಳ ಸಾಲ,
ತಾನಾಗೇ ಉದಯಿಸಿತು ಅವನಲ್ಲಿ ಹೊಸ ಹಂಬಲ!
ಪೂರ್ತಿಯಾಗಿ ಅಳಿಸಿ ಮೊದಲಿದ್ದ ಮೌನ,
ಆಸ್ವಾದಿಸಲಾರಂಭಿಸಿದನು ಹೊಸ ಜೀವನ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment