೧೫-ಜೂನ್-೨೦೦೨,
ಬೆಂಗಳೂರು.
ಬೇಡಿಕೆ
-------------------
ನಾ ಕಳಿಸಲಾರೆ ನಿನಗೆ ಪ್ರೇಮದ ಮೇಘಸಂದೇಶ
ಆದರೂ ಬಯಸುವೆ ನಿನ್ನ ಹೃದಯದ ಬಾಗಿಲಲ್ಲಿ ಪ್ರವೇಶ.
ಕಟ್ಟಲಾರೆ ನಾ ನಿನ್ನ ಪಡೆಯಲು ಬಣ್ಣಬಣ್ಣದ ವೇಷ
ಭರವಸೆ ಮಾತ್ರ ಕೊಡಬಲ್ಲೆ, ನಾ ಮಾಡಲಾರೆ ಮೋಸ.
ಕಣ್ತೆರೆದು ಕನಸುಗಳ ಲೋಕದಿಂದ ಹೊರಬಂದು
ಪರೀಕ್ಷಿಸು ನಿಜಜೀವನಸಾಗರದ ಪ್ರತಿ ಬಿಂದು.
ಆಗ ಕಾಣುವೆ ನನ್ನ ಪ್ರೇಮ ತುಂಬಿದ ಹೂಮನ
ನಿನ್ನ ಮನವ ಮುಟ್ಟುವುದು ಅದರ ಮೃದುತನ
ಕೊಟ್ಟು ನೋಡು ಒಂದೇ ಒಂದು ಅವಕಾಶ
ಅನುಭವಿಸಿ ನೋಡು ನನ್ನೊಲವಿನ ರಭಸ!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment