೦೮-ಜೂನ್-೨೦೦೨,
ಬೆಂಗಳೂರು.
ವಿನಂತಿ
-------------------
ಕುದ್ದು ಕುದ್ದು ಆರಿ ಹೋಗಿದೆ, ತಣ್ಣಗಾಗಿದೆ ಹೃದಯ
ಕೊಟ್ಟ ಮಾತುಗಳ ಅಷ್ಟು ಸುಲಭವಾಗಿ ಮರೆತೆಯಾ ಇನಿಯಾ?
ಪ್ರಾರಂಭಿಸೋಣವೆಂದರೆ ಹೊಸ ಜೀವನ, ಮರೆತು ನಿನ್ನ ಎಂದೆಂದಿಗೆ
ಕಹಿ ನೆನಪುಗಳು ಕಾಡುವವು ಹೊಸ ಸಿಹಿ ಕನಸುಗಳೊಂದಿಗೆ.
ಕಣ್ತೆರೆದು ನೋಡು ಗೆಳೆಯಾ, ನನ್ನ ದುರ್ಭರ ಜೀವನ
ಇನ್ನಾದರೂ ನಿಲ್ಲಿಸು ಹೊಸ ಮುಗ್ಧ ಮನಸ್ಸುಗಳ ದಹನ.
ತಿಳಿ, ನೀ ಹೊರುತ್ತಿರುವುದು ವಿಕೃತ ಸಂತಸದ ಮೂಟೆ
ಒಂದು ದಿನ ನಿನ್ನನ್ನೇ ಬಲಿ ತೆಗೆದುಕೊಳ್ಳುವುದು ಈ ಬೇಟೆ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment