೦೫-ಮೇ-೨೦೦೨,
ಬೆಂಗಳೂರು.
ನವೀನ ನಯನ
-------------------
ಎಂದಾದರೂ ನೋಡಿರುವೆಯಾ ನಿಸರ್ಗವ ಕಣ್ತೆರೆದು?
ನೋಡು, ನಿನ್ನ ನಂಬಿಕೆಯು ಅಣಕಿಸುವುದು ನಿನ್ನ ಹಲ್ಕಿರಿದು!
ಬಿರುಗಾಳಿಯ ಮುಂದೆ ಮರದ ಬೇರು ಅದೆಷ್ಟು ದುರ್ಬಲ!
ಹೊಸ ನೋಟದ ಮುಂದೆ ಕರಗುವುದು ನಿನ್ನ ಅರಿವಿನ ಮೂಲ.
ಸತ್ಯವೇ ಇಲ್ಲದ ಸುಳ್ಳೂ ಅಲ್ಲದ ವಿಚಿತ್ರ ಹೊಸ ಲೋಕ,
ಅಲ್ಲ ಯಾವುದೂ ನಿನಗೆ ಅಲೌಕಿಕ, ಆ ಬಳಿಕ!!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment