೨೬-ಮೇ-೨೦೦೨,
ಕಾಸರಗೋಡು.
ಮೋಸ
-------------------
ನನ್ನಂದವು ನಿನ್ನ ಚಿತ್ತವ ಸೆಳೆದು
ಶುರುವಾಯಿತು ನಮ್ಮೊಳಗೆ ಪ್ರೀತಿಯ ಮಾತು.
ಮೌನವು ಗೆದ್ದು ಮಾತು ಮಣಿದಾಗ,
ಸಂತಸದಿ ಮನವು ಕುಣಿಯಿತು.
ನಿನ್ನ ಹೊದ್ದು ಬಯಕೆಯು ತಣಿದಾಗ,
ಸುಖವಾಗಿ ದೇಹವು ದಣಿಯಿತು.
ನಿನ್ನೆದೆಯಲ್ಲಿ ನಲುಗಿ ತನುವು ನರಳಿತು,
ನನ್ನೊಡಲಲ್ಲಿ ಹೊಸ ಜೀವವು ಅರಳಿತು.
ಜೊತೆಯಾಗಿ ಹಂಚಿಕೋಡೆವು ಆನಂದ,
ಆದರೆ ಕೊನೆಗೆ ನೀ ನನ್ನ ಇರಿದೆ ಹಿಂದಿನಿಂದ!
ಮಾಯವಾಗಿ ಸುಖದ ಭ್ರಮೆಯ ಅಹಂಕಾರ,
ಈಗ ಬರೀ ನೋವು ತುಂಬಿದ ಅಂಧಕಾರ.
ವಿವೇಚನೆ ಇಲ್ಲದೆ ಮಾಡಿ ದೇಹವ ಬತ್ತಲೆ,
ಈಗ ಕಣ್ಣ ಮುಂದೆ ಭಯಾನಕ ಕತ್ತಲೆ!!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment