೦೭-ಮೇ-೨೦೦೨,
ಬೆಂಗಳೂರು.
ಪ್ರಾಪ್ತಿ
-------------------
ಪ್ರಶ್ನೆಗಳನ್ನು ಉತ್ತರಿಸಲು ಯತ್ನಿಸಿದೆ ಪ್ರತಿದಿನ,
ಕೊನೆಗೆ ಕಂಡೆ ಬೆಳಕೊಂದು ಪ್ರಕಾಶಮಾನ,
ಕಣ್ಣು ಮಾತ್ರವಲ್ಲ, ಮನವೂ ಕುರುಡಾಯಿತು!
ಪ್ರಶ್ನೆಗಳ ಅಂತ್ಯ ಮನದಲ್ಲಿ ಮೌನವ ಪಸರಿಸಿತು.
ಏನಾದರೇನು?! ಇದೂ ಒಂದು ರೀತಿಯ ಕ್ರಾಂತಿ!
ಮನದ ಹಂಬಲ ಈಡೇರಿತು, ಪಡೆಯಿತು ಶಾಂತಿ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment