೨೬-ಮೇ-೨೦೦೨,
ಕಾಸರಗೋಡು.
ಕಟ್ಟೆಯೊಡೆದು
-------------------
ಬೆಲೆ ಕಟ್ಟಲಾಗದ ಪ್ರೀತಿಯನ್ನೇ ಮಾರಿ
ನಿರ್ಮಿಸಿದೆ ನೀ ನಮ್ಮ ಕನಸುಗಳ ಸಮಾಧಿ.
ನಿಂತೇ ಹೋಯಿತು ತನುಮನದ ಸಂತಸದ ನರ್ತನ
ದುಃಖವು ವ್ಯಾಪಿಸಿತು ದೇಹದ ಪ್ರತಿಕಣ.
ಎಲ್ಲಿ ನೋಡಿದರೂ ಎದುರಿಸುತ್ತಿರುವೆ ನಿನ್ನ ಮುಗ್ಧ ಕಂಗಳ ನೋಟ
ಕನಸಲ್ಲೂ ನಿನ್ನ ನೆನಪುಗಳ ಎಡೆಬಿಡದ ಕಾಟ.
ಹೇಗೆ ನಿಯಂತ್ರಿಸಲಿ ಹೃದಯದಲ್ಲಿ ತುಂಬಿ ಹರಿಯುತ್ತಿರುವ ಸಂಕಟ
ಕಡಿವಾಣವಿಲ್ಲದ ಕಲ್ಪನೆಯ ಕುದುರೆಯ ನಾಗಾಲೋಟ.
ನಿನ್ನೊಂದಿಗಿದ್ದಾಗ ಮನವಾಗಿತ್ತು ಸಂತಸದ ಚಿಲುಮೆ
ಆದರೀಗ ಮನವು ಬರೀ ವಿಷಾದದ ಮನೆ.
ಉಳಿಯಿತು ಮನದಲ್ಲಿ ನಿನ್ನ ಪ್ರೀತಿಯ ಸುವಾಸನೆ
ಒಂದಿಗೇ ಎಂದೂ ಮುಗಿಯದ ನಿರಂತರ ವೇದನೆ.
ಒಳಗೆಲ್ಲಾ ಹರಿದಾಡಿ ನೋಯಿಸುವ ಭಾವನೆ
ಕೊಲ್ಲುತ್ತಿರುವುದು ನನ್ನನ್ನು ಮೆಲ್ಲಮೆಲ್ಲನೆ.
ಯಾಕೆ ಹೋದೆ ನನ್ನ ಬಿಟ್ಟು ಬಲುದೂರ?
ತಡೆಯಲಾರದೆ ಹೋದೆನು ದುಃಖದ ಮಹಾಪೂರ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment