೦೭-ಮೇ-೨೦೦೨,
ಬೆಂಗಳೂರು.
ನಿರ್ಭಾಗ್ಯ
-------------------
ಪರಿಣಾಮಗಳೆಲ್ಲವ ಅಲಕ್ಷಿಸಿ,
ಪರಿಮಿತಿಗಳ ಹಿಂದಿಕ್ಕಲು ಯತ್ನಿಸಿ,
ಬೆನ್ನಟ್ಟಿ ಹೋದರೆ ಏಕೈಕ ಸತ್ಯವ,
ಸ್ವಾಗತಿಸಿತು ಪರಾಭವ!
ಹೇಗೆ ತೊಲಗಿಸಲಿ ಈಗ ಆಸೆಗಳ ಅಭಾವ!
ಹಾಗೂ ಅಂತರ್ಗತ ಸಂಸ್ಕಾರದ ಪ್ರಭಾವ.
ಈ ಜೀವನ ಮೇಣದ ದೀಪದ ಹಾಗೆ,
ಉರಿದು,ಬೆಂದು ಅಂತ್ಯದ ತನಕ ಬರೀ ಬೇಗೆ.
ಹೆಚ್ಚುತ್ತಿದೆ ಮರಳಿ ಮಣ್ಣಿಗೆ ಸೇರುವ ತವಕ,
ಮನವು ಬಳಲುವುದು ಅಲ್ಲಿಯ ತನಕ.
ಕಾಯುತ್ತಿರುವೆನು ಈ ಜ್ವಾಲೆಯ ಅಂತ್ಯ,
ತಾಳಲಾರೆನು ನನ್ನೊಳಗಿನ ವೈಪರೀತ್ಯ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment