೦೪-ಮೇ-೨೦೦೨,
ಬೆಂಗಳೂರು.
ವಿಸ್ಮಯ
-------------------
ಯಾರಿಗುಂಟು ಯಾರಿಗಿಲ್ಲ ಜ್ಞಾನದ ಭ್ರಮೆ!
ಇದನು ಹಂಬಲಿಸುವವರು ಮಾಡುವರು ಇನ್ನಿಲ್ಲದ ದುಡಿಮೆ.
ಆದರೆ ಈ ದಾರಿಯಲ್ಲಿ ಗುರಿ ಸೇರುವವರು ಕಡಿಮೆ!!
ಇದೇ ಪ್ರಕೃತಿಯ ರಹಸ್ಯ ಮಹಿಮೆ.
ಕಾಯುವರು ಕೆಲವರು ಅದಕಾಗಿ ಅದೆಷ್ಟು ಕಾಲ!
ಅಲ್ಲಿಯ ತನಕ ಅವರಿಗೆ ಜಗತ್ತೇ ಹಾಲಾಹಲ.
ಕೊನೆಗೂ ದೊರೆತಾಗ ಉಕ್ಕಿ ಹರಿಯುವ ನಿತ್ಯ ಸಂತಸ,
ಬೇರೆ ಯಾರೂ ಅರಿಯರು ಅದರ ರಭಸ!!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment