೦೪-ಮೇ-೨೦೦೨,
ಬೆಂಗಳೂರು.
ಮಿಲನ
-------------------
ಕಾದೆ ನಿನಗಾಗಿ ಮನವ ಮುಚ್ಚಿ,
ಮೊದಲ ನೋಟದಲ್ಲೇ ನಿನ್ನ ಮೆಚ್ಚಿ.
ಕೈಗೂಡಲಿಲ್ಲ ನನ್ನಾಸೆ ಬಲು ಬೇಗ,
ತಡೆದೆನು ಬಲು ಕಾಲ ನನ್ನ ಆವೇಗ.
ಬೇಡಿದೆ ನಾ ನಿನ್ನ ಆಸರೆ,
ಅಲಕ್ಷಿಸಿದೆ ನೀ ನನ್ನ ಕರೆ,
ಮರಳಿ ಯತ್ನವ ಮಾಡಿದೆ,
ಹೊರಳಿ ನೀ ನನ್ನತ್ತ ನೋಡಿದೆ.
ಬಾ ನಲ್ಲೆ ಹತ್ತಿರ,
ಆಸೆಯು ಗಗನದೆತ್ತರ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment