೧೯-ಎಪ್ರಿಲ್-೨೦೦೨,
ಬೆಂಗಳೂರು.
ತಿಳುವಳಿಕೆ
-------------------
ನಿನ್ನ ಮನಸ್ಸು ಅದೆಷ್ಟು ಕೋಮಲ!
ಭಾವನೆಗಳು ಅದೆಷ್ಟು ನಿರ್ಮಲ!
ಸಂತಸದಿ ಕುಡಿದೆ ನೀ ಹಾಲಾಹಲ,
ನಿಬ್ಬೆರಗಾಯಿತು ಕಲಿಕಾಲ.
ಕೊಂಡಾಡಿತು ನಿನ್ನ ಜನಸಮೂಹ,
ಅದರಲ್ಲೇನಿದೆ ಸಂದೇಹ?
ಎಲ್ಲರಿಗೂ ಇದು ಅತಿ ರಮ್ಯ,
ಅರಿಯರು ಯಾರೂ ಇದರ ವ್ಯಂಗ್ಯ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment