೨೯-ಎಪ್ರಿಲ್-೨೦೦೨,
ಬೆಂಗಳೂರು.
ಮಹಾತ್ಮ
-------------------
ನೋವಿನ ಕರೆಗೆ ಓಗೊಟ್ಟ ಮನ,
ಸದಾ ಸಕಲರ ಒಳಿತಿನ ಧ್ಯಾನ.
ಬಾಯಲ್ಲಿ ಸ್ವಾತಂತ್ರ್ಯದ ಗಾನ,
ತುಂಬಿ ಹರಡಿದ ಜ್ಞಾನ.
ಮನದ ತುಂಬಾ ತ್ಯಾಗದ ಹುಚ್ಚು,
ಎಲ್ಲರಲ್ಲಿಯೂ ಹಚ್ಚಿದರು ಸ್ವಾತಂತ್ರ್ಯದ ಕಿಚ್ಚು.
ತುಳಿದರು ತಮ್ಮದೇ ಆದ ಹೊಸದಾರಿ,
ಸತ್ಯವ ಬಿಡದ ಹಠಮಾರಿ.
ಬದಲಾವಣೆಯ ಸಾಗರವ ಈಜಿದ ಧೀರ,
ಹೃದಯದಿಂದ ಎಂದೂ ಹೋಗಲಾರರು ದೂರ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment