೨೨-ಎಪ್ರಿಲ್-೨೦೦೨,
ಬೆಂಗಳೂರು.
ಪ್ರಾಪ್ತಿ
-------------------
ಹುಟ್ಟಿತೊಂದು ಕಲ್ಪನೆಯ ಒರತೆ,
ಒರತೆ ತೊರೆಯಾಯಿತು, ಹೊಳೆಯಾಯಿತು,
ಹೊಳೆಯು ಬೆಳೆದು ನದಿಯಾಯಿತು.
ಒಳಿತು ಕೆಡುಕಿನ ಬೇಧವಿಲ್ಲದೆ,
ಸಮಸ್ತವನ್ನು ಬಾಯ್ತೆರೆದು ನುಂಗುತ್ತಾ,
ಕೀಳು ಜ್ಞಾನದ ತೀರಗಳನ್ನು ಕೊಚ್ಚುತ್ತಾ,
ಬೆಳೆಯುತ್ತಾ ಮುಂದುವರಿದು,
ಅನಂತ ತೃಪ್ತಿಯ ಸಾಗರವ ಸೇರಿತು.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment