೧೭-ಎಪ್ರಿಲ್-೨೦೦೨,
ಬೆಂಗಳೂರು.
ರಹಸ್ಯದ ಅನಾವರಣ
-------------------
ತೃಪ್ತಿಯೊಂದು ಗಾಳಿಪಟ,
ನಿಯಂತ್ರಿಸೋಣ ಅದರ ಹಾರಾಟ.
ಹುಡುಕಿ ಹಿಡಿಯೋಣ ಅದರ ದಾರ,
ಚಿಂತೆ ಬೇಡ, ಅದರ ಸಂಖ್ಯೆ ಅಪಾರ.
ಕಂಡು ಕಲಿತು ಕುರುಡಾಗಿ,
ಹಾಕೋಣ ಬನ್ನಿ ನಿರೀಕ್ಷೆಯ ಅಂಗಿ.
ಇದು ಖಂಡಿತಾ ಅಲ್ಲ ದುರ್ಲಭ,
ಹೋಗಿ ಸೇರೋಣ ಆನಂದದ ಗರ್ಭ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment