೨೯-ಎಪ್ರಿಲ್-೨೦೦೨,
ಬೆಂಗಳೂರು.
ಸಾಧನೆ
----------
ಎದುರಾಳಿ ಲೋಕ ಸಕಲ,
ಚಂಚಲ ಚಿತ್ತ ವ್ಯಾಕುಲ.
ಜೊತೆಗಿದ್ದರೆ ಅದಮ್ಯ ಹಂಬಲ,
ಅದೇ ಸಾವಿರ ಆನೆಗಳ ಬಲ.
ಸುಲಭ ಫಲವಲ್ಲ ಗಮ್ಯ,
ಆದರೆ ರುಚಿ ಅತಿ ರಮ್ಯ.
ಮುಂದುವರಿಸದೆ ಕೈಂಕರ್ಯ,
ನಂಬಿ ಮನಸ್ಥೈರ್ಯ,
ಮುನ್ನುಗ್ಗಿದರೆ ಬಂಧನ ಮಾಯ,
ಹಾಕು ಇಂದೇ ಅಡಿಪಾಯ.
ಭ್ರಮೆಗಾಗಿ ದುಡಿಮೆ,
ಗುರಿಯು ಆನಂದದ ಮನೆ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment