೨೨-ಎಪ್ರಿಲ್-೨೦೦೨,
ಬೆಂಗಳೂರು.
ಅತಿಕ್ರಮಣ
-------------------
ಯಾಕಾಗಿ ನಮ್ಮ ಮಧ್ಯೆ ಈ ಕಂದಕ?
ಭಾವನೆಗಳ ತಡೆಯುವ ಪ್ರತಿಬಂಧಕ.
ತೆರೆಯೋಣ ವಿಶಾಲ ಮನಸ್ಸಿನ ಹೆಬ್ಬಾಗಿಲು,
ಕಿತ್ತೊಗೆದು ಪೂರ್ವಾಗ್ರಹ ಪೀಡಿತ ಆಲೋಚನೆಗಳು.
ವಿಸ್ಮಯದ ಕೊಳದಲ್ಲಿ ಮುಳುಗುವುದು ಮನ,
ಈಜುವುದು ತಿಳಿದಿರಲಿ, ಅನ್ಯಥಾ ಸುನಿಶ್ಚಿತ ಮರಣ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment