೨೧-ಎಪ್ರಿಲ್-೨೦೦೨,
ಬೆಂಗಳೂರು.
ಪುನರ್ಸ್ಥಾಪನೆ
-------------------
ಕದಡಿದ ಮನವೇ, ಬಳಲಿದ ಮನವೇ,
ಲೋಕದ ವಿಷದಿಂದ ಯಾಕೆ ಸಾಯುವೆ?
ತೋರು ನಿನ್ನಯ ದೃಢ ಸಂಕಲ್ಪ,
ಅದರ ಮುಂದೆ ಉಳಿದೆಲ್ಲವೂ ಅಲ್ಪ.
ಮಾಡು ಗಾಢವಾಗಿ ಆಲೋಚನೆ,
ಪುನಹ ಬೆಳೆಸಿಕೋ ವಿವೇಚನೆ.
ತೊಲಗುವುದು ಬಾಳ್ವೆಯ ಸಕಲ ಕಷ್ಟ,
ದಾರಿಯು ಕಾಣುವುದು ಬಹು ಸ್ಪಷ್ಟ.
ಖಂಡಿತಾ ಇರಲಿ ಒಂದಿಷ್ಟು ಸ್ವಾರ್ಥ,
ಆಗಲೇ ಬರುವುದು ಬದುಕಿಗೊಂದು ಅರ್ಥ.
ತೃಪ್ತಿಯು ಬೇಕಾದರೆ ನಂಬು ಇದನ್ನೇ ಸತ್ಯ,
ಹೇಗಿದ್ದರೂ ಎಲ್ಲವೂ ಮಿಥ್ಯ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment