೧೯-ಎಪ್ರಿಲ್-೨೦೦೨,
ಬೆಂಗಳೂರು.
ಒದ್ದಾಟ
-------------------
ಮೋಸ ಹೋದೆ ನಿನಗೆ ಹೃದಯವ ಕೊಟ್ಟು,
ಅರಸುತ್ತಿರುವೆ ಈಗ ನಿನ್ನ ದಿಕ್ಕೆಟ್ಟು.
ಬಯಕೆಯ ಕುದುರೆಯೇರಿದ ಲೋಭಿಯಾದೆ,
ಕಡಿವಾಣವಿಲ್ಲದ ಕುದುರೆಯೆಂದು ತಿಳಿಯದಾದೆ.
ದೇಹದ ಕಾವು ಆರಿದ ಮೇಲೆ,
ಅದೆಷ್ಟು ಬೇಗ ಬತ್ತಿತು ನಿನ್ನ ಪ್ರೀತಿಯ ಸೆಲೆ!
ಆದರೂ ನನಗಿದೆ ಬಲವಾದ ನಿರೀಕ್ಷೆ,
ನಿನ್ನಲ್ಲೂ ಬದಲಾವಣೆ ಬರುವುದೆಂಬ ಆಸೆ.
ಹುಡುಕಿ ಹುಡುಕಿ ಬಳಲುವೆ ನಿತ್ಯ,
ಎಂದಾದರೊಂದು ದಿನ ನೀನು ಸಿಗುವೆ, ಇದು ಸತ್ಯ.
ನಿನ ಪರಿವರ್ತಿತ ಮನದ ಹಿತಕರ ಕಂಪು,
ಬೆಂದ ನನ್ನ ಹೃದಯವನ್ನು ಮಾಡುವುದು ತಂಪು.
ಕಾಯುತ್ತಿರುವೆ ನಾ ಆ ಅಮೃತ ಘಳಿಗೆ,
ಎಲ್ಲಿದ್ದರೂ ಕೂಡಲೇ ಬಾ ನನ್ನ ಬಳಿಗೆ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment