೧೭-ಎಪ್ರಿಲ್-೨೦೦೨,
ಬೆಂಗಳೂರು.
ಮತ್ತೊಮ್ಮೆ
-------------------
ಸುಂದರ ಹುಡುಗಿಯೊಬ್ಬಳತ್ತ ಹರಿಯಿತು ನನ್ನ ಗಮನ,
ತಾಗಿಯೇ ಬಿಟ್ಟಿತು ಮನ್ಮಥನ ಬಾಣ.
ಹೃದಯದಲ್ಲಿ ಮೂಡಿ ಬಂತು ಪ್ರೇಮ ಕವನ,
ಚಡಪಡಿಸಿತು ಅವಳಿಗಾಗಿ ಈ ದುರ್ಬಲ ಮನ.
ಆದರೆ ಇನ್ನೊಬ್ಬನ ಮೇಲಿತ್ತು ಅವಳ ಧ್ಯಾನ,
ತಾಳಲಾರದೆ ಹೋದೆನು ಕೋಮಲ ಭಾವನೆಗಳ ದಹನ.
ಪುನಹ ಹಾಡಿತು ಹೃದಯವು ವಿರಹ ಗಾನ,
ಕಾಯುತ್ತಿರುವೆನು ಮನದನ್ನೆಯ ಆಗಮನ!
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment