೧೨-ಎಪ್ರಿಲ್-೨೦೦೨,
ಬೆಂಗಳೂರು.
ಆಕ್ರಂದನ
-------------------
ಮಮತೆಯ ಮಡಿಲಲಿ ತೋರಿದೆ ಸ್ವರ್ಗ ಅನುದಿನ,
ದಾರಿಯ ತೋರಿ, ಕೈಯ ಹಿಡಿದು ನಡೆಸಿದೆ ಈ ಕಂದನ.
ಸದಾ ಪ್ರೀತಿಯ ಸೂಸುವ ನಿನ್ನ ಮುಗ್ಧ ಮನ,
ಹರಡಿತು ಹೃದಯದಲ್ಲಿ ಸಂತಸದ ಮೌನ.
ನೀನೊಂದು ಇಂಪಾದ ಸುಂದರ ಕವನ,
ನೀನಿಲ್ಲದೇ ಈ ಬದುಕು ಕಟು ಕಾನನ.
ತುಂಬಿದೆ ಬೆಳಕು ಮನದಲ್ಲಿ,
ದೀಪವ ಬೆಳಗಿದ ನೀನೆಲ್ಲಿ?
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment