೦೬-ಮಾರ್ಚ್-೨೦೦೨,
ಬೆಂಗಳೂರು.
ಬಿಡುಗಡೆ
-------------------
ಸಂಪಾದಿಸುವಷ್ಟರಲ್ಲಿ ಮೂರು ಹೊತ್ತಿನ ಕೂಳು,
ತಲೆಯೆಲ್ಲಾ ಬೋಳು ಬೋಳು.
ಬರುವಷ್ಟರಲ್ಲಿ ತಲೆಯ ಮೇಲೊಂದು ಸೂರು,
ಆಯುಷ್ಯ ಕಳೆಯಿತು ಮುಕ್ಕಾಲು.
ಮನವೂ ದಣಿಯಿತು, ತನುವೂ ಬಳಲಿತು,
ಹೇಗೆ ಪಡೆಯುವೆ ಶಾಂತಿ ಚಿರಂತನ?
ಹಿಂತಿರುಗಿ ನೋಡಿ, ಸಂಕಟ ಪಟ್ಟು,
ಬಯಸುವೆ ನೀ ಪರಿವರ್ತನ.
ಮುಂದುವರಿದು, ಪುನಹ ಬಂದು,
ಶುರುಮಾಡುವೆ ಹೊಸ ಜೀವನ.
ನೋಡಲ್ಲಿ! ಕಾಲದ ಹಣ್ಣು,
ನಿನ್ನ ಮೇಲೂ ಇದೆ ಅದರ ಕಣ್ಣು.
ಮಾಗುವುದು ಅದು ಒಂದು ದಿನ,
ಅಲ್ಲಿಯ ತನಕ ಪುನರಾವರ್ತನ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment