೦೫-ಮಾರ್ಚ್-೨೦೦೨,
ಬೆಂಗಳೂರು.
ಅಮ್ಮ
-----------
ಅನಂತ ಪ್ರೀತಿಯ ಆಕಾಶವಾಗಿ
ಆಸರೆ ಕೊಡುವ ಭೂಮಿಯಾಗಿ
ಜೀವ ಕೊಡುವ ಉಸಿರಾಗಿ
ದಾರಿಯ ತೋರುವ ಬೆಳಕಾಗಿ
ಮನವ ಮುದಗೊಳಿಸುವ ಹಸುರಾಗಿ
ಅಪಾರ ಕರುಣೆಯ ಆಕರವಾಗಿ
ದಣಿದಾಗ ಸಿಗುವ ಅಮೃತವಾಗಿ
ದುಃಖಕ್ಕೆ ಕಡಿವಾಣವಾಗಿ
ಕಷ್ಟದಲ್ಲಿ ಪಾಲುದಾರಳಾಗಿ
ಸಂತೈಸುವ ಗೆಳತಿಯಾಗಿ
ಕ್ಷಮೆಯ ಪ್ರತಿರೂಪವಾಗಿ
ಇರುವ ಪ್ರತ್ಯಕ್ಷ ದೈವ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment