೦೬-ಮಾರ್ಚ್-೨೦೦೨,
ಬೆಂಗಳೂರು.
ಸರಸ ಸಲ್ಲಾಪ
-------------------
ಯಾಕೆ ಮುನಿಸಿಕೊಂಡಿರುವೆ ಪ್ರಿಯೆ?
ನಾನೇನು ತಪ್ಪು ಮಾಡಿರುವೆ?
ಇದ್ದರೆ ಚಂದ ಸಣ್ಣ ಪುಟ್ಟ ಮನಸ್ತಾಪ,
ಅದಕ್ಕೆ ಬೇಡ ಇಷ್ಟೊಂದು ಕೋಪ.
ಏನೋ ಸ್ವಲ್ಪ ರೇಗಿಸಿದೆ, ನಿಜ,
ಹೇಳು, ಇವೆಲ್ಲಾ ಇಲ್ಲದಿದ್ದರೆ ಏನು ಮಜ?
ಅಸಹನೀಯ ನಿನ್ನೀ ಮೌನ,
ಪರಿತಪಿಸುತ್ತಾ ಇದೆ ನಿನಗಾಗಿ ಇಲ್ಲೊಂದು ಮನ.
ಅಬ್ಬಾ! ತಾಳಲಾರೆ ಈ ವಿರಹದ ಬೇಗೆ,
ನಾನೂ ಕೋಪಿಸಿಕೊಂಡೇನು, ಜೋಕೆ.
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment