About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, March 5, 2002

ಯಶೋಗಾಥೆ


೦೫-ಮಾರ್ಚ್-೨೦೦೨,
ಬೆಂಗಳೂರು.
ಯಶೋಗಾಥೆ
-------------------
ಬಲವಾಗಿ ಬಿತ್ತು ವಿಧಿಯ ಪೆಟ್ಟು
ಅಲೆದೆ ಎಲ್ಲೆಲ್ಲೋ ದಿಕ್ಕೆಟ್ಟು
ಬಂತು ಜಗದ ಮೇಲೆ ಎಲ್ಲಿಲ್ಲದ ಸಿಟ್ಟು
ಓಡಿ ಹೋದೆ ಎಲ್ಲವ ಬಿಟ್ಟು.

ಕಾಲವು ತೋರಿತು ತನ್ನಯ ಚಮತ್ಕಾರ,
ಪ್ರಕೃತಿಯೂ ನೀಡಿತು ತನ್ನ ಸಹಕಾರ.
ಶಾಂತವಾಯಿತು ಮನದ ಅಗ್ನಿಪರ್ವತ,
ಶುರುವಾಯಿತೊಂದು ಹೊಸ ಸಂಗೀತ.

ಹಳೆಯ ನೆನಪುಗಳ ಸುಟ್ಟು
ಅಂತ್ಯವಿಲ್ಲದ ದಾರಿಗಳ ಬಿಟ್ಟು
ನೆರಳು ಕೊಡುವ ಗಿಡಗಳನ್ನು ನೆಟ್ಟು
ಮಾಡಿದೆ ಹೊಸ ಜೀವನದ ಹುಟ್ಟು.

ಗುರಿಯಿಲ್ಲದ ಬಾಳು ಕಣ್ತೆರೆಯಿತು
ಹೊಸದೊಂದು ಗುರಿ ಕೈ ಬೀಸಿ ಕರೆಯಿತು.
ಮನಸನ್ನು ಗೆದ್ದು ಸಾಗಿದೆನು ಗುರಿಯತ್ತ,
ಈಗ ಮನವು ಸಂತೃಪ್ತ.

ಗೆದ್ದೆನು ನೆನಪುಗಳ ಕದನ,
ದೊರಕಿತು ಸುಂದರ ಜೀವನ.
ಆಹಾ! ಇದುವೇ ಅಮೃತ ಸಿಂಚನ
ಸ್ವರ್ಗಕ್ಕೆ ಕೊನೆಯ ಸೋಪಾನ.
ಕೃಷ್ಣ ಶಾಸ್ತ್ರಿ ಸಿ.

0 comments:

Post a Comment