೦೫-ಮಾರ್ಚ್-೨೦೦೨,
ಬೆಂಗಳೂರು.
ನಮ್ಮೆಲ್ಲರ ಕಥೆ-ವ್ಯಥೆ
-------------------
ಹೋದೆ ಇಂಟರ್ವ್ಯೂಗಳಿಗೆ ನೂರಾರು
ಅಲ್ಲೆಲ್ಲಾ ನನ್ನಂತಹವರು ಸಾವಿರಾರು
ಒಪ್ಪುತ್ತೇನೆಂದೆ ನಿಮ್ಮೆಲ್ಲಾ ಕರಾರು
ಆದರೂ impress ಆಗಲಿಲ್ಲ ಯಾರೂ
ಸರಿ, ಎಲ್ಲರಂತೆ ನಾನೂ ಬರೆದೆ ಗೇಟು
ಆದರೆ ಅದು ತುಂಬಾ ಎತ್ತರವಿತ್ತು
ಗೇಟ್ ಫಲಿತಾಂಶಕ್ಕೆ ಬಿಟ್ಟಾಯ್ತು ಎಳ್ಳು ನೀರು
ಇನ್ನು ಪುನಹ ಆಗಬೇಕು ಇಂಟರ್ವ್ಯೂಗಳಿಗೆ ತಯಾರು
ದೇವರೇ, ನೀನೇ ಒಂದು ದಾರಿಯ ತೋರು.
ಕೃಷ್ಣ ಶಾಸ್ತ್ರಿ ಸಿ.
ವಿ.ಸೂ. ತಂತ್ರಜ್ಞಾನ ಜಗತ್ತಿನಲ್ಲಿ ಜಾಗತಿಕ slowdown ಇದ್ದ ಕಾಲ ಅದು, ಅನೇಕಾನೇಕ ಇಂಜಿನಿಯರುಗಳು ಕೆಲಸ ಸಿಗದೆ ಪರದಾಡುತ್ತಿದ್ದರು, ಬೇರೆ ದಾರಿ ಕಾಣದೆ ಮುಂದಕ್ಕೆ ಓದಲು ಯೋಜನೆ ಹಾಕುತ್ತಿದ್ದರು, ಇಂತಹ ಸಂದರ್ಭದಲ್ಲಿ ಅನೇಕರ ಭಾವನೆ/ಸ್ಥಿತಿಗಳಿಗೆ ಕನ್ನಡಿ ಹಿಡಿದು ಬರೆದ ಕವಿತೆಯಿದು.
0 comments:
Post a Comment