೩೦-ನವೆಂಬರ್-೨೦೦೧,
ಕಾಸರಗೋಡು.
ಪ್ರಶ್ನೆ
--------
ನನಸಾಗದ ಕನಸು
ಸೊರಗಿದ ಮನಸ್ಸು
ಸಮಸ್ಯೆಗಳು ಹಲವು
ಅಂತ್ಯವಿಲ್ಲದ ನೋವು
ಬದುಕು ನಿಂತ ನೀರು
ನಿರಂತರ ಕಣ್ಣೀರು
ದಿಕ್ಕಿಲ್ಲದ ಬದುಕು
ಬೆಲೆಯಿಲ್ಲದ ಸಾವು
ಸಾಯುತ್ತಾ ಬದುಕುವವರು
ಸಾವಿರಾರು
ಮೌನವಾಗಿರುವ ದೇವರು
ಉತ್ತರ ಹೇಳುವವರಾರು?
ಕೃಷ್ಣ ಶಾಸ್ತ್ರಿ ಸಿ.
0 comments:
Post a Comment