tag:blogger.com,1999:blog-1570601480010352989.post8116591381872822081..comments2023-10-18T02:02:09.554-07:00Comments on ತೆರೆದ ಪುಟಗಳು - Open Pages: ಸಂಪ್ರದಾಯಗಳು, ವಿಜ್ಞಾನ ಹಾಗೂ ಧಾರ್ಮಿಕತೆಕೃಷ್ಣ ಶಾಸ್ತ್ರಿ - Krishna Shastryhttp://www.blogger.com/profile/00602716408042486823noreply@blogger.comBlogger3125tag:blogger.com,1999:blog-1570601480010352989.post-26180674912278982802011-12-06T10:38:16.812-08:002011-12-06T10:38:16.812-08:00ಶಂಕರ ಭಟ್ಟರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ದೇವರ ವಿ...ಶಂಕರ ಭಟ್ಟರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ದೇವರ ವಿರುದ್ಧ ಬರೆದ ಲೇಖನ ಅಲ್ಲ. ಸಂಪ್ರದಾಯಗಳನ್ನು ವಿಶ್ಲೇಷಿಸುವ ಪ್ರಯತ್ನ, ಅವುಗಳನ್ನು ಹೇಗೆ ವಸ್ತುನಿಷ್ಠವಾಗಿ ಪ್ರಚುರಪಡಿಸಿದರೆ ಒಳಿತು ಎಂಬುದರ ಬಗ್ಗೆ ನನ್ನ ಅನಿಸಿಕೆಗಳು, ಅಷ್ಟೆ. ತಾರ್ಕಿಕ ಎಂದು ಕಂಡರೆ ಜನ ಒಪ್ಪುತ್ತಾರೆ, ಉಳಿದವರು ಬಿಡುತ್ತಾರೆ :-)<br /><br />ಇನ್ನು ದೇವರ ವಿಷಯದಲ್ಲಿ: ಖಂಡಿತಾ ದೇವರು ಎಂಬುದು ಒಂದು ಸುಂದರ ಕಲ್ಪನೆ, ಕೆಲವು ಸಲ ಪ್ರಯೋಜನಕಾರಿ. ಆದರೆ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಲಸುಮೇಲೋಗರ ಮಾಡಿದರೆ ಅನೇಕ ತೊಂದರೆಗಳು ಹುಟ್ಟುತ್ತವೆ ಎಂದು ನನ್ನನಿಸಿಕೆ ಅಷ್ಟೆ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-41792305621033235592011-12-06T07:45:54.718-08:002011-12-06T07:45:54.718-08:00ದೇವರು ಒಂದು ಜಾಣ ಸುಂದರ ಕಲ್ಪನೆ,ಮಕ್ಕಳ ಪ್ರಶ್ನೆಗಳಿಗೆ ಸುಲ...ದೇವರು ಒಂದು ಜಾಣ ಸುಂದರ ಕಲ್ಪನೆ,ಮಕ್ಕಳ ಪ್ರಶ್ನೆಗಳಿಗೆ ಸುಲಭದಲ್ಲಿ ಉತ್ತರಿಸಬಹುದು.ಉದಾ:ಅಮ್ಮನಾನೆಲ್ಲಿಂದಬಂದೆ,ಅಜ್ಜಿ ಸತ್ತಮೇಲೆ ಎಲ್ಲಿಗೆಹೋದರು;ಒಂದೇ ಉತ್ತರ "ದೇವರು"ದೊಡ್ಡವರಾದ ಮೇಲೆ ತಿಳಿದುಕೊಳ್ಳುತ್ತಾರೆ,ತೊಂದರೆಯಿಲ್ಲ.ನಮಗೆಲ್ಲಾ 'ದೇವರು'ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ,ಆದರೆ ನಮ್ಮ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ.ಎಶ್ಟೋ ಮಂದಿ ದೇವರಿಂದಲೇ ತಮ್ಮಬದುಕನ್ನು ಸಾಗಿಸುತ್ತಾರೆ.ಸಂಕಟ ಬಂದಾಗ ದೇವರ ಮೇಲೆ ಹಾಕಿ ನಿರಾಳ ವಾಗಿರುತ್ತಾರೆ.ಹೀಗೆ ದೇವರಿಂದ ತಂಬಾ ಲಾಭವಿದೆ.ದೇವರು,ನಂಬಿಕೆ,ಆಚರಣೆ,ಪೂಜೆ,ತೀರ್ತ,ಜನಿವಾರ,ಇತ್ಯಾದಿಗಳೇಜೀವನವಲ್ಲ ಇವು ಜೀವನದ ಒಂದು ಸಣ್ಣ ಅಂಶ ಅಶ್ಟೇ.ನಿಮ್ಮಮುಖ್ಯವಾದ ಜೀವನಕ್ಕೆ ತೊಂದರೆಯಾಗದಂತೆ ಹೊಂದಾಣಿಕೆ ಮಾಡಿಕೊಳ್ಳಿ.ಎಲ್ಲರನ್ನೂ ತಿದ್ದಲು ಪ್ರಯತ್ನಿಸುವುದು.....?Shankara Bhathttps://www.blogger.com/profile/07209657803292197734noreply@blogger.comtag:blogger.com,1999:blog-1570601480010352989.post-14561359406363119332011-12-01T00:06:03.316-08:002011-12-01T00:06:03.316-08:00ವಿ.ಸೂ. ಈ ಪ್ರತಿಕ್ರಿಯೆಯನ್ನು ಕಳಿಸಿದವರಿಗೆ ನೇರವಾಗಿ ಬ್ಲಾ...ವಿ.ಸೂ. ಈ ಪ್ರತಿಕ್ರಿಯೆಯನ್ನು ಕಳಿಸಿದವರಿಗೆ ನೇರವಾಗಿ ಬ್ಲಾಗಿನಲ್ಲಿ ಬರೆಯಲು ಇಷ್ಟವಿರಲಿಲ್ಲ, ನನಗೆ ನೇರವಾಗಿ ಕಳುಹಿಸಿದರು, ಅವರ ಅನುಮತಿಯೊಂದಿಗೆ ಹೆಸರು ಹಾಕದೇ ಪ್ರತಿಕ್ರಿಯೆಯನ್ನು ಮಾತ್ರ ಹಾಕುತ್ತಿದ್ದೇನೆ.<br /><br />ಇತ್ತೀಚೆಗೆ ಒಬ್ಬ ಆಸ್ತಿಕರ ಜೊತೆ ನನಗೆ ದೀರ್ಘ ಚರ್ಚೆ ನಡೆಯಿತು. ಹೋಮ, ಯಜ್ಞ ಇತ್ಯಾದಿಗಳು ವೈಜ್ಞಾನಿಕ ಎಂಬುದು ಅವರ ವಾದವಾಗಿತ್ತು. ಇತ್ತೀಚೆಗೆ ನಡೆದ ಯಜ್ಞದಿಂದಾಗಿ ವಾತಾವರಣದಲ್ಲಿ ಆದ ಬದಲಾವಣೆಯನ್ನು ಅವರು ಉದಾಹರಣೆಯಾಗಿ ಕೊಟ್ಟರು. ಇನ್ನೂ ಹೆಚ್ಚಿನ ಬಲವಾದ ವೈಜ್ಞಾನಿಕ ಪುರಾವೆ ಕೇಳಿದಾಗ ‘ಹಾಗೆಂದು ವಾರ್ತಾಪತ್ರಿಕೆಯಲ್ಲಿ ಬಂದಿತ್ತು, ಅಷ್ಟು ಪುರಾವೆ ಧಾರಾಳವಾಯಿತು’ ಎಂದುಬಿಟ್ಟರು! ಹೀಗಿದೆ ನೋಡಿ ನಮ್ಮ ವೈಜ್ಞಾನಿಕ ಮನೋಭಾವನೆ.<br /><br />ಜನರು ಬಹಳ ಅಮೂರ್ತ (abstract), ಅಸ್ಪಷ್ಟ ಪುರಾವೆಗಳಿಗೆ ಒಪ್ಪಿಕೊಂಡುಬಿಡುತ್ತಾರೆ, ಹಾಗೂ ಅದು ವೈಜ್ಞಾನಿಕ ಪುರಾವೆ ಎಂದು ತಲೆದೂಗುತ್ತಾರೆ. ಇಂತಹ ವಿಷಯದಲ್ಲಿ ನಮ್ಮವರ ಜೊತೆ ಚರ್ಚೆ ಮಾಡುವುದು ಭಯಂಕರ ಕಷ್ಟ ಎಂದು ನಾನು ಕಂಡುಕೊಂಡ ವಿಚಾರ (ನನ್ನ ಹೆತ್ತವರನ್ನೂ ಸೇರಿಸಿ).<br /><br />ಕುಂಬಳಕಾಯಿ ಕೊರೆದರೆ ಅಪ್ಪ-ಅಮ್ಮನ ಜೀವಕ್ಕೆ ಕಂಟಕ ಇದೆಯಂತೆ, ಹಾಗಾಗಿ ಅಪ್ಪ-ಅಮ್ಮ ಇರುವವರು ಕುಂಬಳಕಾಯಿ ಕೊರೆಯಬಾರದಂತೆ. ಇದನ್ನು ಅಮ್ಮನ ತಲೆಯಿಂದ ತೆಗೆದೊಗೆಯಲು ನನ್ನಿಂದ ಸಾಧ್ಯವಿದ್ದ ಪ್ರಯತ್ನಗಳನ್ನೆಲ್ಲಾ ಮಾಡಿ ಸೋತಿದ್ದೇನೆ. ಬೇಕಾದಷ್ಟು ನಿಜಜೀವನದ ದೃಷ್ಟಾಂತಗಳನ್ನು ಕೊಟ್ಟರೂ ಕೂಡ ಅಮ್ಮನಿಗೆ ಇನ್ನೂ ನಂಬಿಕೆ ಬರಲಿಲ್ಲ!ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.com