tag:blogger.com,1999:blog-1570601480010352989.post4482198921017079955..comments2023-10-18T02:02:09.554-07:00Comments on ತೆರೆದ ಪುಟಗಳು - Open Pages: ಬ್ರಾಹ್ಮಣ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಕೃಷ್ಣ ಶಾಸ್ತ್ರಿ - Krishna Shastryhttp://www.blogger.com/profile/00602716408042486823noreply@blogger.comBlogger14125tag:blogger.com,1999:blog-1570601480010352989.post-16165230064189496862019-03-11T04:57:03.684-07:002019-03-11T04:57:03.684-07:00ಶುದ್ಧ ಅಸಂಬದ್ಧವಾಗಿದ್ದು...ನೀವೂ ಇಂಗ್ಲೀಷರು ಮತ್ತು ಬುದ್ಧ...ಶುದ್ಧ ಅಸಂಬದ್ಧವಾಗಿದ್ದು...ನೀವೂ ಇಂಗ್ಲೀಷರು ಮತ್ತು ಬುದ್ಧಿಜೀವಿಗಳ ಮಾತನ್ನೇ ಬೆಳೆಸುತ್ತಿದ್ದೀರಿ ಅಷ್ಟೇ....ಬಹಳ ಸಮಾಜದ ಕೆಡುಕಿಗೆ ಕಾರಣವಾಗುತ್ತದೆ ನಿಮ್ಮ ಅಭಿಪ್ರಾಯದಂತೆ ನಡೆದರೆ ..ಯಾವುದೋ ಬುದ್ಧಿಜೀವಿಗಳ ಬರಹದಂತಿದೆ....vicharavinoda.blogspot.comhttps://www.blogger.com/profile/10477526384814609673noreply@blogger.comtag:blogger.com,1999:blog-1570601480010352989.post-61628168949659542082019-03-11T04:56:50.793-07:002019-03-11T04:56:50.793-07:00ಶುದ್ಧ ಅಸಂಬದ್ಧವಾಗಿದ್ದು...ನೀವೂ ಇಂಗ್ಲೀಷರು ಮತ್ತು ಬುದ್ಧ...ಶುದ್ಧ ಅಸಂಬದ್ಧವಾಗಿದ್ದು...ನೀವೂ ಇಂಗ್ಲೀಷರು ಮತ್ತು ಬುದ್ಧಿಜೀವಿಗಳ ಮಾತನ್ನೇ ಬೆಳೆಸುತ್ತಿದ್ದೀರಿ ಅಷ್ಟೇ....ಬಹಳ ಸಮಾಜದ ಕೆಡುಕಿಗೆ ಕಾರಣವಾಗುತ್ತದೆ ನಿಮ್ಮ ಅಭಿಪ್ರಾಯದಂತೆ ನಡೆದರೆ ..ಯಾವುದೋ ಬುದ್ಧಿಜೀವಿಗಳ ಬರಹದಂತಿದೆ....vicharavinoda.blogspot.comhttps://www.blogger.com/profile/10477526384814609673noreply@blogger.comtag:blogger.com,1999:blog-1570601480010352989.post-89601496862154963682013-01-17T01:45:57.296-08:002013-01-17T01:45:57.296-08:00ತುಂಬಾ ಚನ್ನಾಗ ಇದ್ದು ಲೇಖನ ....ತುಂಬಾ ಚನ್ನಾಗ ಇದ್ದು ಲೇಖನ ....Santosh vaidyahttps://www.blogger.com/profile/11871783662340666175noreply@blogger.comtag:blogger.com,1999:blog-1570601480010352989.post-1703655835078006002013-01-17T01:42:14.287-08:002013-01-17T01:42:14.287-08:00ತುಂಬಾ ಚನ್ನಾಗ ಇದ್ದು ಲೇಖನ ....ತುಂಬಾ ಚನ್ನಾಗ ಇದ್ದು ಲೇಖನ ....Santosh vaidyahttps://www.blogger.com/profile/11871783662340666175noreply@blogger.comtag:blogger.com,1999:blog-1570601480010352989.post-85148697171211011682011-12-01T04:31:20.926-08:002011-12-01T04:31:20.926-08:00ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಮೂರನೆಯ ಹಾಗೂ ಕೊನೆಯ ಭ...ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಮೂರನೆಯ ಹಾಗೂ ಕೊನೆಯ ಭಾಗ ಇದು. ವಿಧವೆಯರ ಕಷ್ಟಗಳಿಗೆ ಸ್ಪಂದಿಸಿ ಬರೆದ ಹೃದಯಸ್ಪರ್ಶಿ ಕವನ ಇದು.<br /><br />ಅಕ್ಕನ ಆಸೆ<br />-----------<br />ನಿನ್ನ ಗೆದ್ದೆಲಿ ಬೆಳೆದ ಗಂಧ ಸಾಲೆಕ್ಕಿ<br />ಕುಟ್ಟಿದರೂ ಕಡೆದರೂ ಪರಿಮಳವ ಕೊಡದಾ ||<br />ನಿನ್ನ ಜಾಲಿಲಿ ಬೆಳೆದ ಮಲ್ಲಿಗೆಯ ಬಳ್ಳೀಲಿ<br />ನಿತ್ಯ ಅರಳುವ ಹೂಗು ಒಂದೆ ಅಲ್ಲದ ಹೇಳು?<br />ನಿನ್ನ ಮಾವಿನ ಮರಲಿ ಬಂದು ಕೂಗುವ ಹಕ್ಯ<br />ಬಾಯಿ ಮುಚ್ಚಿಸುಲೆ ನಿನಗೆಡಿಗ ಹೇಳು!<br />ಪಶ್ಚಿಮಕ್ಕೆ ಸರಸರನೆ ಹರಿವ ನೇತ್ರಾವತಿಯ<br />ತಡೆದು ನಿಲ್ಲಿಸುಲೆ ನಿನಗೆಡಿಗ ಹೇಳು!<br />ನಿನ್ನ ಗೆದ್ದೆಲಿ ಬೆಳೆದ ಗಂಧ ಸಾಲೆಕ್ಕಿ...<br />ತಿಂಬಲಿದ್ದರೆ ಸಾಲ ಅಗಿವ ಹಲ್ಲುದೆ ಬೇಕು<br />ಮನಸು ಇದ್ದರೆ ಸಾಲ... ಮಾಡುವವರು ಬೇಕು<br />ಎಲ್ಲರೊಪ್ಪುವ ಹಾಂಗೆ ಬದಲು ಮಾಡೆಕ್ಕಾರೆ<br />ಮೇಗಣಿಂದಲೆ ಬರೆಕು ಒಪ್ಪಿಗೆಯ ನೀತಿ.. ||<br />ನಿನ್ನೆ ಮಂಗಲೆನಿಸಿದ್ದ ನಿನ್ನಕ್ಕ ತಂಗೆಕ್ಕೂ<br />ಇಂದಮಂಗಲೆಯಪ್ಪದು.. ಹೇಂಗಪ್ಪ ಹೇಳು?<br />ಭಾವ ಇದ್ದರೂ ಒಂದೆ.. ಇಲ್ಲದಿದ್ದರೂ ಒಂದೆ..<br />ಆನು ಹೇಳುವುದಿಷ್ಟೆ ಕೇಳು ಒಪ್ಪಣ್ಣ<br />ಈ ಅಕ್ಕನಾಶವೇ ಹೆದರದ್ದೆ ನೀನು<br />ಗುರುಹಿರಿಯರೆದುರಿಲ್ಲಿ ಮಡುಗೆಕ್ಕು ನೋಡು!<br />ಇದುವೆ ನಿನ್ನಕ್ಕಂಗೆ ನೀ ಬಿಡುವ ನೀರು<br />ಬೇರೆಂತ ಬೇಡೆನಗೆ ಎನ್ನ ತಮ್ಮಣ್ಣ..<br />ನಿನ್ನ ಗೆದ್ದೆಲಿ ಬೆಳೆದ ಗಂಧಸಾಲೆಕ್ಕಿ ಕುಟ್ಟಿದರೂ ಕಡೆದರೂ ಪರಿಮಳವ ಕೊಡದಾ ||<br /><br />ಗಾಂಧಿ ಬಜಾರ್ ಮಾಸಿಕದಲ್ಲಿ ಪ್ರಕಟಿತ - ಸೆಪ್ಟೆಂಬರ್ ೨೦೦೧<br /><br />ಹಕ್ಯ = ಹಕ್ಕಿಯ<br />ನಿನಗೆಡಿಗ = ನಿನ್ನಿಂದ ಸಾಧ್ಯವಾದೀತೇ<br />ಮೇಗಣಿಂದಲೇ ಬರೆಕು ಒಪ್ಪಿಗೆ = ಧರ್ಮಾಧಿಪತಿಗಳಿಂದ ಬರತಕ್ಕದ್ದು ಒಪ್ಪಿಗೆಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-16448478986136020212011-12-01T04:21:07.054-08:002011-12-01T04:21:07.054-08:00ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಎರಡನೇ ಭಾಗ ಇದು.
ಧಾರ...ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಎರಡನೇ ಭಾಗ ಇದು.<br /><br />ಧಾರ್ಮಿಕತೆ<br /><br />ಇದರಲ್ಲಿ ಗಂಡು ಮಕ್ಕಳ ಪಾತ್ರ ಅತ್ಯಂತ ಹಿರಿದು. ದಯಮಾಡಿ ನೀವು ಗಂಡು ಮಕ್ಕಳು ನಿಮ್ಮ ಪತ್ನಿಯಾಗುವವಳಿಗೆ ಹಿರಿಯರ ಸಮಕ್ಷಮ ತಾಳಿ ಕಟ್ಟುವಾಗ ಹೇಳುವ ಮಾತುಗಳನ್ನು ಅರ್ಥಮಾಡಿಕೊಳ್ಳಿ. ‘ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವಂ ಶರದಃ ಶತಂ’<br /><br />‘ಇದು ನಾನು ಬದುಕಿರುವ ತನಕ ಮಾತ್ರ’ ಎನ್ನುವ ಅರ್ಥವಲ್ಲ. ಹೇಳಿಕೆಗಳಿಗೆ ಭಾವನಾತ್ಮಕ ಚಿಂತನೆಯ ಹಿನ್ನೆಲೆಯೂ ಇದ್ದಾಗ ಮಾತ್ರ ಅದು ಅತ್ಯಂತ ಮಹತ್ವದ್ದಾಗಿರುತ್ತದೆ. ‘ತ್ವಂ ಜೀವಂ ಶರದಃ ಶತಂ’ ಎಂದರೆ ನೀನು ನೂರು ವರ್ಷ ಕಾಲ ಬಾಳು. ಈ ಮಂಗಲ ಸೂತ್ರದ ಜೊತೆಗೆ ನೀನು ನೂರು ವರ್ಷ ಬಾಳು. ಇದು ನಿನಗೆ ನನ್ನ ಕೊಡುಗೆ. ಇದು ನಿನಗೆ ಶ್ರೀರಕ್ಷೆಯಾಗಿರಲಿ.<br /><br />ಮತ್ತೆ ಪತಿಯನ್ನು ಕಳಕೊಂಡಾಗ ಆಕೆ ಮಕ್ಕಳಿಗೆ ತಾಯಿಯಲ್ಲವೇ? ಅಕ್ಕ ತಮ್ಮಂದಿರಿಗೆ ಒಡ ಹುಟ್ಟುಗಳಿಗೆ ಹೆತ್ತವರಿಗೆ ಆಕೆ ಮೊದಲಿನ ಸಂಬಂಧದಲ್ಲಿಯೇ ಹೆಸರಿಕೊಳ್ಳುವಾಕೆ ಹೇಗೆ ನಿಮ್ಮ ಪುರುಷಪ್ರಧಾನ ಧಾರ್ಮಿಕ ಜಗತ್ತಿಗೆ ಮಾತ್ರ ವಿಧವೆಯಾಗುತ್ತಾಳೆ?<br /><br />ನಾನೇ ನೋಡಿದ್ದೇನೆ. ನನ್ನ ತಾಯಿಯ ತಂದೆಗೆ ಪತ್ನಿ ಅಲ್ಲದೆ ಇನ್ನೊಬ್ಬಾಕೆ ಹೆಣ್ಣು ಇತ್ತು. ನನ್ನ ಪತಿಯವರ ಅಜ್ಜ(ತಾಯಿಯ ತಂದೆ)ನವರಿಗೂ ಹೆಣ್ಣು ಇತ್ತು. ಹೀಗಿದ್ದ ಹೆಣ್ಣುಗಳಿಗೆ ಆತ ಮಕ್ಕಳನ್ನು ಕೊಟ್ಟಿದ್ದರು. ಅಂಥವರಿಗೆ ನಮ್ಮ ಧಾರ್ಮಿಕ ಜಗತ್ತು ಪೂಜೆ ಪುರಸ್ಕಾರಗಳಿಂದ ಹೊರಗೆ ಹಾಕಿದೆಯೇ?!!!<br /><br />ನೀವು ನಿಮ್ಮ ಪತ್ನಿಯರಿಗೆ ಮೊದಲೇ ಹೇಳಿ "ಒಂದು ವೇಳೆ ನಾನು ಮೊದಲು ಸಾವನ್ನು ಕಂಡರೆ ನೀನು ಮಂಗಲೆಯಾಗಿಯೇ ಇರಬೇಕು, ಇರುತ್ತೀ" ಎಂದು. ನನ್ನ ತೀರ್ಥರೂಪರಾದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು ತನ್ನ ೯೧ನೇ ವರ್ಷ ನಿಧನರಾದಾಗ ತನ್ನ ಪತ್ನಿಯನ್ನು ಬಳಿ ಕರೆದು ಮೇಲಿನ ಮಾತುಗಳನ್ನು ಹೇಳಿದ್ದಾರೆ. ಅಂಥಾ ತಂದೆಯವರನ್ನು ಪಡೆದ ನಾನು ಧನ್ಯೆ, ಭಾಗ್ಯವಂತೆ. ನೋಡಿ, ಇದನ್ನು ಬರೆಯುತ್ತಿರುವಾಗ ನಾನು ಅಳುತ್ತಿದ್ದೇನೆ. ತಂದೆಯವರಿಗೆ ನನ್ನ ಕಣ್ಣೀರಿನ ಕೃತಜ್ಞತೆಗಳನ್ನು ಈ ಮೂಲಕ ಹೇಳುತ್ತಿದ್ದೇನೆ ‘ಅಪ್ಪಾ, ನಾನು ಮುಂದಿನ ಜನ್ಮದಲ್ಲೂ ಹೆಣ್ಣಾಗಿ ಜನಿಸುವೆ, ನಿಮ್ಮ ಪ್ರೀತಿಯ ಮನೋರಮೆಯೇ ಆಗುವೆ ಅಪ್ಪಾ’<br /><br />ದೇವರೇ, ನೀನು ಇದ್ದೀಯಾ? ನನ್ನಂಥ ಹೆಣ್ಣುಜೀವಗಳ ನೋವು ನಿನಗೆ ಕಾಣುವುದಿಲ್ಲವೇ?<br /><br />ರಾಜಾರಾಮ್ ಮೋಹನ ರಾಯ್ ಈ ಭಾರತ ಭೂಮಿಯಲ್ಲಿ ಹುಟ್ಟದಿದ್ದರೆ ನನ್ನನ್ನು ಇಲ್ಲಿನ ಅವಿದ್ಯಾವಂತ ಬ್ರಾಹ್ಮಣರು ನನ್ನ ಪತಿಯ ಶವದ ಜೊತೆಗೆ ಜೀವಂತವಾಗಿ ಸುಡುತ್ತಿದ್ದದು!<br /><br />ದಯಮಾಡಿ ಹವ್ಯಕ ಮಹಾಶಯರು ಸಹಕರಿಸಿರಿ. ನಿಮ್ಮ ಪೈಕಿ ಅಕಸ್ಮಾತ್ ಯಾರಾದರೂ ನಿಧನರಾದಾಗ ಅಲ್ಲಿಗೆ ಹೋಗಿ ಆತನ ಪತ್ನಿಯ ಅಸ್ತಿತ್ವ ಪತಿ ಬದುಕಿರುವಾಗ ಹೇಗಿತ್ತೋ ಹಾಗೆಯೇ ಇರಬೇಕು ಎನ್ನುವ ಚಿಂತನೆಗಳಿಂದ ಆಕೆಯನ್ನು ಬೆಂಬಲಿಸಿರಿ. ಪುರುಷ ಪತ್ನಿಯನ್ನು ಕಳಕೊಂಡಾಗ ಆತನ ಅಸ್ತಿತ್ವಕ್ಕೆ ಏನೇನೂ ಕೊರತೆ ಇಲ್ಲ. ಹಾಗಾದರೆ ಹೆಣ್ಣಿಗೆ ಮಾತ್ರ ಯಾಕೆ ಈ ಶಿಕ್ಷೆ? ಯಾಕೆ ಇಂಥಾ ಅಮಾನವೀಯ ಶಿಕ್ಷೆ?...<br /><br />ನಾನು ಹೇಳುವುದೂ ಅದನ್ನೇ. ನಾವು ಮಾನವರು ಮನುಷ್ಯತ್ವವನ್ನು ಉಳಿಸೋಣ, ಬೆಳೆಸೋಣ. ಪರಸ್ಪರ ಜೀವಿತದಲ್ಲಿ ಸಹಕರಿಸೋಣ. ಸಮಾಜಕ್ಕೆ ಮಾದರಿಯಾಗೋಣ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-37862478159535650342011-12-01T04:20:10.815-08:002011-12-01T04:20:10.815-08:00ದಕ್ಷಿಣ ಕನ್ನಡ ಕರಾವಳಿಯ ಚಿಂತನಶೀಲ ಲೇಖಕಿಯರಲ್ಲೊಬ್ಬರಾದ ಮನ...ದಕ್ಷಿಣ ಕನ್ನಡ ಕರಾವಳಿಯ ಚಿಂತನಶೀಲ ಲೇಖಕಿಯರಲ್ಲೊಬ್ಬರಾದ ಮನೋರಮಾ ಎಂ. ಭಟ್ ಬರೆದ ಪ್ರತಿಕ್ರಿಯೆ ಇಲ್ಲಿದೆ. ೭೯ರ ಇಳಿವಯಸ್ಸಿನಲ್ಲಿಯೂ ಲವಲವಿಕೆ ಹಾಗೊ ನಿರ್ಭೀತಿಯಿಂದ ಅವರು ಓಡಾಡುವ ರೀತಿ ನೋಡಿದರೆ ಯಾರಾದರೂ ದಂಗಾಗಬೇಕು. ಮಹಿಳೆಯರ, ಅದರಲ್ಲೂ ವಿಧವೆಯರ ಕಷ್ಟಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಅನೇಕ ಕಾಲ ಹೋರಾಡಿದ ಈ ಧೀರ ಮಹಿಳೆ ಇಂದಿಗೂ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ನಾನು ಬರೆದ ಲೇಖನ ಕೊಟ್ಟಕೂಡಲೇ ಆಸಕ್ತಿಯಿಂದ ತೆಗೆದುಕೊಂಡು ಸುದೀರ್ಘವಾದ ಪ್ರತಿಕ್ರಿಯೆ ಕೊಟ್ಟು ಹರಸಿದ್ದಾರೆ ಈ ನನ್ನ ಅಜ್ಜಿ. ಅವರು ಬರೆದ ‘ಹೆಣ್ಣಿಗೇಕೆ ಈ ಶಿಕ್ಷೆ’ ಎಂಬ ಪುಸ್ತಕವನ್ನು ನೀವು ಓದಲೇ ಬೇಕು. ಆಗ ಕೆಳಗೆ ಅವರು ಬರೆದ ಕೆಲವು ವಿಷಯಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ದೊರೆಯುವುದು.<br /><br />- ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಂಡು ಬಂದದ್ದು ಪುರುಷನೇ. ಆದುದರಿಂದ ಯಜಮಾನ ಆತನೇ ಸರಿ. ಧನ-ಧಾನ್ಯ ಇವುಗಳ ಅಧಿಕಾರಿಯೂ ಆತನೇ. ಈಗಿನ ಕಾನೂನಿನಂತೆ ಪಿತ್ರಾರ್ಜಿತದಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕುಗಳು ಇವೆ, ಆದರೆ ಯಾವ ಅಣ್ಣತಮ್ಮಂದಿರು ಪಾಲು ಮಾಡಿಕೊಳ್ಳುವಾಗ ಅಕ್ಕತಂಗಿಯರಿಗೆ ಕೊಡುತ್ತಾರೆ ಹೇಳಿ?<br /><br />- ಬ್ರಾಹ್ಮಣರೇ ಮೇಲು, ಶೂದ್ರರು ಕೀಳು - ಯಾಕೆಂದರೆ ಬ್ರಾಹ್ಮಣರಿಗೆ ತಮ್ಮ ತೋಟದಲ್ಲಿ ಗದ್ದೆಗಳಲ್ಲಿ ದುಡಿಸಿಕೊಳ್ಳಲು ಬೇಕಾದವರು ಅವಿದ್ಯಾವಂತ ಶೂದ್ರರೇ ಆಗಿತ್ತು. ಆದರೆ ಈಗ ವಿದ್ಯೆಯ ಅವಕಾಶಗಳನ್ನು ಶೂದ್ರರೂ ಕೂಡ ತಮ್ಮ ಮಕ್ಕಳಿಗೆ ಕೊಡಲು ಆಶಿಸುವ ಕಾರಣದಿಂದ ಬ್ರಾಹ್ಮಣರಿಗೆ ಮನೆ-ತೋಟ-ಗದ್ದೆಗಳಲ್ಲಿ ದುಡಿಸಿಕೊಳ್ಳಲು ಜನರೇ ಸಿಗುತ್ತಿಲ್ಲವಂತೆ! ವೇದಾಧ್ಯಯನ ಕಲಿಯುವ ಯೋಗ್ಯತೆಯನ್ನು ಶತಮಾನಗಳ ಹಿಂದೆ ನಮ್ಮ ಧರ್ಮ ಕೊಟ್ಟಿದ್ದು ಕೇವಲ ಬ್ರಾಹ್ಮಣ ಪುರುಷರಿಗೆ ಮಾತ್ರ! ಸ್ತ್ರೀಯರಿಗೂ-ಶೂದ್ರರಿಗೂ ವೇದಾಧ್ಯಯನದ ಅಧಿಕಾರವೇ ಇರಲಿಲ್ಲ.<br /><br />ಹೆಣ್ಣು ಭ್ರೂಣ ಹತ್ಯೆ<br /><br />ಪ್ರಕೃತಿ ಸಹಜವಾಗಿ ಗಂಡು ಸುಖವಾದ ಜೀವನ ನಡೆಸುತ್ತಾನೆ. ಗರ್ಭವನ್ನು ಹೊರುವ, ಹೆರುವ, ಮೊಲೆಯುಣಿಸಿ ಮಗುವನ್ನು ಸಾಕುವ, ಮುಟ್ಟು ಇತ್ಯಾದಿ ಶಾರೀರಿಕ ಕಷ್ಟಗಳಿಂದ ಆತ ಸ್ವತಂತ್ರ ತಾನೇ? ಹೆಣ್ಣಾಗಿ ತಾಯಿ ಅದೆಷ್ಟು ನೋವು-ಮಾನಸಿಕ ಯಾತನೆ-ಭಾವನಾತ್ಮಕ ದೈಹಿಕ ಅಡಚಣೆಗಳನ್ನು ಅನುಭವಿಸುತ್ತಾಳೆ. ಈ ಸಮಯದಲ್ಲಿ ಅವಳ ಕೈಹಿಡಿದಾಗ ಆಕೆಗೆ ಧೈರ್ಯ ಕೊಟ್ಟು ಆಕೆಯ ಬೆನ್ನೆಲುಬಾಗಿ ಬದುಕಿನಲ್ಲಿ ನಿಂತರೆ ಆಕೆಗೆ ತನ್ನ ಗರ್ಭ ಹೆಣ್ಣಾದರೂ ಸರಿ, ಗಂಡಾದರೂ ಸರಿ ಎಂದು ಕಾಣಬಹುದು. ಹಾಗೆ ನೋಡಿದರೆ ಗರ್ಭದಲ್ಲಿರುವ ಭ್ರೂಣವನ್ನು ಗಂಡು ಅಥವಾ ಹೆಣ್ಣು ಮಾಡುವ ಚೈತನ್ಯ ಗಂಡಿನ ವೀರ್ಯಕ್ಕೆ ಸಂಬಂಧಿಸಿದ್ದು. ಅದು ಗೊತ್ತಿದೆಯೇ ನಿಮಗೆ?<br /><br />ಹೆಣ್ಣುಮಕ್ಕಳ ವಿವಾಹ, ವರದಕ್ಷಿಣೆ, ಆಭರಣಳು - ಇವುಗಳನ್ನು ಹೊಂದಿಸಿಕೊಳ್ಳುವ ತಾಪತ್ರಯಗಳನ್ನು ಎಣಿಸುವಾಗಲೇ ನಮಗೆ... (ನಮ್ಮಲ್ಲಿ ಕೆಲವರಿಗೆ ಹೆಣ್ಣುಮಗು ಬೇಡ ಎಂಬ ಭಾವನೆ ಬಂದರೆ ಆಶ್ಚರ್ಯವಿಲ್ಲ)<br /><br />ನೆನಪಿಡಿ ಭ್ರೂಣಹತ್ಯೆ ಮಾಡಿಸಿಕೊಳ್ಳುವಾಗ ಗರ್ಭದ ಲಿಂಗ ಪರೀಕ್ಷೆ, ಅಬಾರ್ಶನ್ ಇತ್ಯಾದಿಗಳು ನಡೆಯಬೇಕಾದರೆ ಆಕೆಯ ಗಂಡನ ಸಹಿ ಬೇಕೇಬೇಕು. ಏನೇ ಆಗಲಿ ಈಗಂತೂ ಭ್ರೂಣಹತ್ಯೆ ಕಾನೂನುಬಾಹಿರವಾಗಿದೆ.<br /><br />ಶಿಕ್ಷಣ<br /><br />ಶಿಕ್ಷಣಕ್ಕೂ ಮದುವೆಗೂ ಈಗ ಏನೇನೂ ಸಂಬಂಧವಿಲ್ಲ. ಹೆಣ್ಣುಮಕ್ಕಳಿಗೆ ಬೇಕಾದಷ್ಟು ಭವಿಷ್ಯದ ಕನಸುಗಳನ್ನು ಹೆಣೆಯಲು ಅವಕಾಶಗಳಿವೆ. ಮಾಧ್ಯಮಗಳು ಸಾಕಷ್ಟು ವಿಚಾರಗಳನ್ನು ಕಾಲೆಜಿಗೆ ಕಾಲಿರಿಸಿದ ಹೆಣ್ಣುಮಕ್ಕಳಿಗೆ ಹೇಳುತ್ತವೆ. "ಹೆಚ್ಚು ಓದಿದರೆ ಮಾಣಿ ಸಿಕ್ಕ" ಹೇಳುವ ಮಾತುಗಳು ಕೇವಲ ಕಪೋಲಕಲ್ಪಿತ. ಮದುವೆಯ ಸಂಬಂಧಗಳು ಕೂಡಿಬರಲು ಬೇರೆ ಬೇರೆ ಕಾರಣಗಳಿವೆ. ಐ.ಐ.ಟಿ. ಸೀಟು ಸಿಕ್ಕನಂತರ ಓದುವ ಸ್ಥಳ-ಕಾಲೇಜು ಇವುಗಳ ಆಯ್ಕೆಯಲ್ಲಿ ನಿರ್ಧಾರ ಮಾಡುವಾಕೆ ವಿದ್ಯಾರ್ಥಿನಿಯೇ.<br /><br />ಉದ್ಯೋಗ<br /><br />ಉದ್ಯೋಗ, ವೈವಾಹಿಕ ಜೀವನ, ಮುಂದಿನ ಪೀಳಿಗೆಯ ಮಕ್ಕಳನ್ನು ಸಾಕುವ ಬೆಳೆಸುವ ಅಥವಾ ನಮಗೆ ಈಗ ಮಕ್ಕೊ ಬೇಡ ಎಂದು ನಿರ್ಧರಿಸಿಕೊಂಡು ಉದ್ಯೋಗವನ್ನು ಮುಂದುವರಿಸುವ ಸಮಸ್ಯೆ-ನಿರ್ಧಾರ ಎಲ್ಲವೂ ಪರಸ್ಪರ ದಂಪತಿಗಳದ್ದು. ಇದರಲ್ಲಿ ಹೊಂದಾಣಿಕೆ ಅತ್ಯಂತ ಮುಖ್ಯ.<br /><br />ಕೃಷಿಯಲ್ಲಿ ನಮ್ಮ ಗಂಡುಮಕ್ಕಳಿಗೆ ಆಸಕ್ತಿ ಕಡಿಮೆಯಾಗಿದೆ. ಆತನಿಗೂ ಪಟ್ಟಣದ ಬದುಕೇ ಬೇಕು. ಹೆಂಡತಿಯ ತೋಟದ ಕೆಲಸಕ್ಕೆ ಬಿಟ್ಟು ಪಟ್ಟಣಕ್ಕೆ ಕೆಲಸಕ್ಕೆ ಹೋಪ ಗಂಡು ಹೆಚ್ಚು ಓದಿದವನಲ್ಲ. ಮೆಡಿಕಲ್-ಇಂಜಿನಿಯರಿಂಗ್-ಪಿ.ಎಚ್.ಡಿ. ಮಾಡಿದವರು ಪತ್ನಿಯನ್ನು ಮಕ್ಕಳನ್ನು ಆಸ್ತಿಯ-ಹಳ್ಳಿಯ ಮನೆಯಲ್ಲಿ ಬಿಟ್ಟಾರೆಯೇ?<br /><br />ಇಬ್ಬರೂ ಉದ್ಯೋಗ ಮಾಡುವ ದಂಪತಿಗಳಿಗೆ ಹೆಚ್ಚಾಗಿ ಅಡಿಗೆ ಕಾಫಿ-ಟೀ ಇತ್ಯಾದಿಗಳ ಮಾಡಲಿಕ್ಕೆ ಇಬ್ಬರಿಗೂ ಬರುತ್ತದೆ. ಇದು ಇತ್ತೀಚೆಗಿನ ಬೆಳವಣಿಗೆ. ನನ್ನ ಇಬ್ಬರು ಗಂಡುಮಕ್ಕಳಿಗೂ ಅಡಿಗೆ ಕೋಣೆಯ ಎಲ್ಲಾ ಕೆಲಸಗಳು ಗೊತ್ತಿವೆ. ನಾವು ತಾಯಂದಿರು ಇಂಥಾ ಪಾಠಗಳನ್ನು ಹೇಳಿ ಕೊಡಲೇ ಬೇಕು. ಹೆಣ್ಣು ಮಕ್ಕಳು ಇರುವುದು ಗಂಡನ ಊಟ ತಿಂಡಿ ಮತ್ತು ದೇಹದ ಆಸೆಗಳನ್ನು ಪೂರ್ತಿ ಮಾಡಲಿಕ್ಕೆ ಮಾತ್ರ ಅಲ್ಲ.ಕೃಷ್ಣ ಶಾಸ್ತ್ರಿ - Krishna Shastryhttps://www.blogger.com/profile/00602716408042486823noreply@blogger.comtag:blogger.com,1999:blog-1570601480010352989.post-50368536158420645712011-11-09T22:47:07.948-08:002011-11-09T22:47:07.948-08:00ಕರವೀರ ..ಸರಿಯಾಗಿ ಹೇಳಿದ್ದಾರೆ..ಕರವೀರ ..ಸರಿಯಾಗಿ ಹೇಳಿದ್ದಾರೆ..Anonymousnoreply@blogger.comtag:blogger.com,1999:blog-1570601480010352989.post-27694748848586942652011-10-28T06:29:02.440-07:002011-10-28T06:29:02.440-07:00ಕರವೀರ ಹೇಳಿದ ಮಾತು ನೂರಕ್ಕೆ ನೂರು ನಿಜ.ಕರವೀರ ಹೇಳಿದ ಮಾತು ನೂರಕ್ಕೆ ನೂರು ನಿಜ.Rajendra Halemanehttps://www.blogger.com/profile/02898781382228284462noreply@blogger.comtag:blogger.com,1999:blog-1570601480010352989.post-20521782570713055072011-10-28T05:08:54.811-07:002011-10-28T05:08:54.811-07:00ಒಳ್ಳೆಯ ಲೇಖನ...ಆದರೆ ಎನ್ನ ಅಭಿಪ್ರಾಯಲ್ಲಿ ಹೆಣ್ಣು-ಗಂಡು &...ಒಳ್ಳೆಯ ಲೇಖನ...ಆದರೆ ಎನ್ನ ಅಭಿಪ್ರಾಯಲ್ಲಿ ಹೆಣ್ಣು-ಗಂಡು "ಸಮಾನತೆ" ಹೇಳಿ ನೋಡುವುದಕ್ಕಿಂತ "ಪೂರಕವಾಗಿ" ಇದ್ದರೆ ಜೀವನ ಹೆಚ್ಚು ಅರ್ಥಪೂರ್ಣವಾಗಿ ಸಾಗಿಸಿ ಯಶಸ್ವಿಗೊಳಿಸಲು ಸಾದ್ಯ ಹೇಳಿ ಕಾಣ್ತು..ಕೆಲವು ಪರಿಸ್ಥಿತಿಲಿ ವ್ಯವಹರಿಸುಲೆ ಹೆಣ್ಣು ಹೆಚ್ಚು ಸಮರ್ಥಳು..ಇನ್ನು ಕೆಲವೊಮ್ಮೆ ಗಂಡು.. "ಸಮಾನತೆ" ಹೇಳುವಲ್ಲಿ "ಅಹಂ"(ego)ಹೆಚ್ಚು ಕೆಲಸ ಮಾಡ್ತು..ಉದಾಹರಣಗೆ ಗಂಡ ಹೆಂಡತಿಯರಲ್ಲಿ ಜಗಳ ಆದರೆ ಪುನಃ ಸರಿ ಆಯೆಕ್ಕಾದರೆ ಆರು ಮೊದಲು ಮಾತಾಡುದು...?ಇಬ್ಬರೂ ಆನು ಅವನಿಂದ(ಅವಳಿಂದ) ಎಂತ ಕಮ್ಮಿ..ಬೇಕಾದರೆ ಮೊದಲು ಮಾತಾಡಲಿ ಹೇಳಿ ಕೂರುತ್ತವು..(ಈ ರೀತಿಯ ಘಟನೆಗೊ ಕೆಲವು "ವಿಚ್ಛೇದನ" ವರೆಗೆ ಹೋದ್ದದು ನೋಡಿದ್ದೆ)."ಪೂರಕ" ಜೀವನಲ್ಲಿ ಒಂದೊಂಮ್ಮೆ ಆರು ಬೇಕಾದರೂ ಮಾತಾಡುಲಕ್ಕು(ಪೂರಕ ಹೇಳಿ ತಿಳ್ಕೊಂಡರೆ ಜಗಳದ ಪ್ರಶ್ಣೆಯೇ ಇಲ್ಲೆ..ಹಾಂಗೆ ಹೇಳಿ ಹೆಣ್ಣೊಬ್ಬನೇ ಕೆಲಸ ಮಾಡೆಕ್ಕು ಹೇಳಿ ಅರ್ಥ ಅಲ್ಲ..ಕೆಲಸಂಗಳ ಹಂಚಿಗೊಳೆಕ್ಕು ಹೇಳಿಯೇ).ಆದ್ದರಿಂದ ಗಂಡು ಮೇಲಲ್ಲ..ಹೆಣ್ಣು ಕೀಳಲ್ಲ..ಸಮಾನರೂ ಅಲ್ಲ...!ಒಬ್ಬರಿಗೊಬ್ಬ ಪೂರಕ ಹೇಳುವ ದೃಷ್ಟಿಂದ ನೋಡೆಕ್ಕು ಹೇಳಿ...ಸರಸ ಬಿಂದುhttps://www.blogger.com/profile/03011783038809466192noreply@blogger.comtag:blogger.com,1999:blog-1570601480010352989.post-61030050914877921022011-10-28T02:51:00.587-07:002011-10-28T02:51:00.587-07:00Good article, worth reading.Good article, worth reading.sharmahttps://www.blogger.com/profile/13749615463700573436noreply@blogger.comtag:blogger.com,1999:blog-1570601480010352989.post-12243307719654586492011-10-28T02:21:00.688-07:002011-10-28T02:21:00.688-07:00ತುಂಬಾ ಸಕಾಲಿಕವಾಗಿ ಬಂದ ಬರೆಹ..
ನಮ್ಮ ಗುಂಪಿಲಿಪ್ಪ ಎಲ್ಲೋರ...ತುಂಬಾ ಸಕಾಲಿಕವಾಗಿ ಬಂದ ಬರೆಹ..<br />ನಮ್ಮ ಗುಂಪಿಲಿಪ್ಪ ಎಲ್ಲೋರೂ ಓದೆಕ್ಕದ ಲೇಖನ..<br />ಆನು ಹವ್ಯಕಲ್ಲಿ ಇದರ ಹಾಕುತ್ತೆ..ಅಕ್ಕನ್ನೇ..ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-1570601480010352989.post-55647198225996358102011-10-27T22:46:43.532-07:002011-10-27T22:46:43.532-07:00ತುಂಬಾ ಸಂಶೋಧಕ ಲೇಖನ. ಹೆಚ್ಚಿನ ವಿಚಾರ ನಿಂಗಳ ಒಳಮನಸ್ಸಿಂದ ...ತುಂಬಾ ಸಂಶೋಧಕ ಲೇಖನ. ಹೆಚ್ಚಿನ ವಿಚಾರ ನಿಂಗಳ ಒಳಮನಸ್ಸಿಂದ ಬಂದದು ವ್ಯಾಪಕ ಚರ್ಚೆ ಆಯೆಕ್ಕು. ಒಳ್ಳೆ ಚಿಕಿತ್ಸಕ ಲೇಖನ. ಶುಭಾಶಯಗಳು .ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1570601480010352989.post-79866298673636553132011-10-27T14:07:19.528-07:002011-10-27T14:07:19.528-07:00ಅತ್ಯುತ್ತಮ ಲೇಖನ ಮಾನ್ಯರೇ..
ಒದಿ ತುಂಬ ಖುಷಿ ಆತು.ಅತ್ಯುತ್ತಮ ಲೇಖನ ಮಾನ್ಯರೇ.. <br />ಒದಿ ತುಂಬ ಖುಷಿ ಆತು.ಚೆಂದುಳ್ಳಿhttps://www.blogger.com/profile/07954794505733725744noreply@blogger.com